ಸಿದ್ದಗಂಗಾಶ್ರೀಗಳ ಕುರಿತಾದ ಸಾಕ್ಷ್ಯಚಿತ್ರ ಅವತಾರ
Posted date: 08 Thu, Sep 2016 – 10:12:17 AM

ನಡೆದಾಡುವ ದೇವರು ಎಂದೇ ಭಕ್ತರಿಂದ ಕರೆಸಿಕೊಳ್ಳುತ್ತಿರುವ ಸಿದ್ದಗಂಗಾ ಮಠದ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರ ಕುರಿತಾದ ಅವತಾರ ವೆಂಬ ಸಾಕ್ಷ್ಯಚಿತ್ರ ಇತ್ತೀಚೆಗೆ ಅನಾವರಣಗೊಳಿಸಲಾಯಿತು. ಆಡ್ ಕಂಪನಿ ನಡೆಸುತ್ತಿರುವ ಸುಧೀರ್ ಅವರು ಈ ಕಿರುಚಿತ್ರದ ನಿರ್ದೇಶಕರು. ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಸಮಗ್ರ ಮಾಹಿತಿಗಳನ್ನು ಕಲೆಹಾಕಿ ಅವರ ಜನ್ಮಸ್ಥಳವಾದ ಮಾಗಡಿ ತಾಲ್ಲೂಕಿನ ವೀರಾಪುರ, ಸಿದ್ದಗಂಗಾ ಕ್ಷೇತ್ರದಲ್ಲಿ ಸ್ವಾಮೀಜಿಗಳ ದೈನಂದಿನ ಚಟುವಟಿಕೆಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ ಈ ಸಾಕ್ಷ್ಯ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ನಿರ್ಮಾಪಕ, ವಿತರಕ ಹೆಚ್.ಡಿ. ಗಂಗರಾಜು, ಉದ್ಯಮಿ ಎನ್.ಆರ್. ಜಗದೀಶ, ಕೌನ್ಸಿಲರ್ ನಟರಾಜ್, ವಿಶ್ವನಾಥ್ ಮೊದಲಾದವರು ಈ ಸಮಾರಂಭದಲ್ಲಿ ಭಾಗವಹಿಸಿ ಸ್ವಾಮೀಜಿಗಳ ಸಾಧನೆಯ ಬಗ್ಗೆ ಮಾತನಾಡಿದರು. ಈ ಸಾಕ್ಷ್ಯಚಿತ್ರಕ್ಕೆ ೪ ಜನ ಛಾಯಾಗ್ರಹಕರು ಕೆಲಸ ಮಾಡಿದ್ದು, ನಾನಿ ಖ್ಯಾತಿಯ ತ್ಯಾಗರಾಜು ಮತ್ತು ಮಂಜುನಾಥ ಸಂಗೀತ ಸಂಯೋಜನೆ ಮಾಡಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed